Kourava News

ಆಡೂರಲ್ಲಿ ಕೊರೊನಾ ವಾರಿಯರ‍್ಸ್‌ಗಳಿಗೆ ಆತ್ಮೀಯ ಸನ್ಮಾನ…….


ಹಾನಗಲ್ಲ: ಕೊರೊನಾ ಸೋಂಕು ಹರಡದಂತೆ ತಮ್ಮ ಜೀವದ ಹಂಗು ತೊರೆದು ಸೇವೆಸಲ್ಲಿಸುತ್ತಿರುವ ಕೊರೊನಾ ವಾರಿಯರ‍್ಸ್‌ಗಳಾಗಿರುವ ಪೊಲೀಸ್ ಇಲಾಖೆಯವರಿಗೆ, ಆರೋಗ್ಯ ಇಲಾಖೆಯವರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರಿಗೆ ಮೇ.೧ರಂದು ಆಡೂರಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮನೊಹರ ತಹಶೀಲ್ದಾರ್ ಮತ್ತು ಕೆ ಪಿ ಸಿ ಕಾರ್ಯದರ್ಶಿಗಳಾದ ಪ್ರಕಾಶ್‌ಗೌಡ ಪಾಟೀಲ್, ಮಾರನಬೀಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೀರಣ್ಣ ಮರುಡಿ ಕೊರೊನಾ ವಾರಿಯರ‍್ಸ್‌ಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಎಂ ತಹಸೀಲ್ದಾರ್, ಆಡೂರು ಪಿಎಸ್‌ಐ ಎಚ್. ಆಂಜನೇಯ, ಮುಖಂಡರಾದ ರವೀಂದ್ರ ಚಿಕ್ಕೇರಿ, ಸುರೇಶ ದೊಡ್ಡಕುರುಬರ, ಸಿದ್ದನಗೌಡ ಪಾಟೀಲ್, ಪಿಡಿಒ ಕಲ್ಲಪ್ಪ ಚಿಕ್ಕೇರಿ ಆಡೂರು ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವರ್ಗಇನ್ನೂ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

satta king gali